Monday, April 26, 2010

........

ಸಂಜೆಗೆಂಪಿನ ಪರದೆ ತೆರೆದುಕೊಳುವಾ ವೇಳೆ
ಅರೆಬಿರಿದ ಹೂ ಮೊಗ್ಗು ಚೆಲ್ವ ಬೀರಿ ನಗಲು
ಮೌನದೊಳು ಮರೆತಿದ್ದ  ಹಾಡು
ಮನದೊಳಗೆ ಸಾಲು ಸಾಲಾಗಿ ಬರಲು
ನನ್ನೊಳಗೆ ನಾ ಹಾಡಿಕೊಳ್ಳುವ ಬಯಕೆ
ದನಿಯಿಲ್ಲದಾ ಹಾಡಿಗೆ ರಾಗ ತಾಳಗಳು ಬೇಕೇ?
ಭಾವವೊಂದಿರೆ ಸಾಕೆ?

ಸಂಜೆ ನಸುಗಪ್ಪು ಕವಿಯುವ ಹೊತ್ತು
ಬೀಸಿ ಬೀಸಿ ಬರುತಿಹ ತಂಪಿನ ಗಾಳಿಯಲಿ
ನೆನಪು ಕನಸುಗಳ ತರಗೆಲೆಗಳ ಹಾಸಿ ಕೂತಿರುವಾಗ
ಹಾರಿ ಹೋಗುತಿರುವ ಒಂದೊಂದು ಎಲೆಯನ್ನು
ಒಬ್ಬಳೇ ನಾನು ಹಿಡಿದು ತರಲೇನು ಇಲ್ಲ ಹಾರ ಬಿಡಲೇನು?

ಕವಿದ ಕಡುಗಪ್ಪಿನಲಿ ಚಿಟ ಪಟನೆ ಬೀಳುವ ಹನಿಗಳು
ಕಂಡೂ  ಕಾಣದೆ ಕಳೆದುಹೋಗುತಿರುವಾಗ 
ಸಾಲು ಸಾಲು ಹಾಡು ಮನದಲ್ಲೇ ಮತ್ತೆ ಮರೆತ್ಹೋಗುವ ಮುನ್ನ
ನೀ ಬಂದು ದನಿಯಾಗು ಹಾಡು ಹಾಡಲೇ ಬೇಕಿದೆ ನಾನು .
ನೆನಪು ಕನಸಿನ ತರಗೆಲೆಗಳು ಹಾರಿ  ಚೆದುರಿ
ಅಂಗಳದ ಒದ್ದೆಯಲಿ ಕರಗಿಹೋಗುವ ಮುನ್ನ
ನೀ ಬಂದು ಜೊತೆಯಾಗು ಎಲ್ಲವನೂ ಒಟ್ಟುಗೂಡಿಸಬೇಕಿದೆ ನಾನು.

8 comments:

ತೇಜಸ್ವಿನಿ ಹೆಗಡೆ said...

ತುಂಬಾ ಸುಂದರ ಕವನ. ಕಲ್ಪನೆಗೆಳೆಸುವಂತಿದೆ.

sunaath said...

ಭಾವಪೂರ್ಣ ಕವನ. ಮೆಚ್ಚುಗೆಯಾಯಿತು.

ಶಾಂತಲಾ ಭಂಡಿ (ಸನ್ನಿಧಿ) said...

ಶ್ಯಾಮಾ...
ಚಂದ ಇದ್ದು. ಇಷ್ಟಾತು :-)

ಗೌತಮ್ ಹೆಗಡೆ said...

ishtvaaytu :) nice ...

ಸಿಂಧು sindhu said...

ಶ್ಯಾಮಾ,

ತುಂಬ ಇಷ್ಟ ಆತು.
ಎಷ್ಟ್ ಚೆನಾಗಿ ಬರದ್ದೆ ಗೊತ್ತಾ.
Please dont discontinue. ಬರೀತಾ ಇರು.

ಪ್ರೀತಿಯಿಂದ
ಸಿಂಧು.

Ittigecement said...

ಬಹಳ ಸುಂದರ ಕವನ.....

ಶ್ಯಾಮಾ said...

ಇಷ್ಟೊಂದು ದಿನಗಳ ಬಳಿಕ ಬರೆದರೂ ಪ್ರೀತಿಯಿಂದ ಬಂದು ಓದಿ ಪ್ರತಿಕ್ರಿಯಿಸಿದ ಎಲ್ಲರಿಗೂ ಧನ್ಯವಾದಗಳು.

Unknown said...

Goooood Times..:-)