Thursday, September 27, 2007

ಮಾಸದಿರಲಿ...

ಬಿಳಿ ಹಾಳೆಯ ಮೇಲೆ ನಾ ಬರೆದ
ನಾಲ್ಕು ಸಾಲು ಸುಂದರ ಕವನವಾಯ್ತು..
ಬಣ್ಣ ಚೆಲ್ಲಿದರೆ ಹಾಳೆಯ ಮೇಲೆಲ್ಲ
ರಂಗು ರಂಗಿನ ಚಿತ್ತಾರವಾಯ್ತು,
ಅಂಗೈ ಅರಳಿಸಿ
ನೋಡಿದರೆ ಅಲ್ಲೂ ರಂಗು ರಂಗು..
ಒದ್ದೆಯಂಗಳದಲ್ಲಿ ಚುಕ್ಕಿಯೂ ಇಡದೆ
ಎಳೆದ ಎಳೆಗಳೆಲ್ಲ ಸೇರಿ
ಚಂದದ ರಂಗೋಲಿ ಯಾಯ್ತು,
ಒಂದೇ ಒಂದು ಹೂವಿಲ್ಲ ಅಂಗಳದ
ಮೊಲ್ಲೆ ಮಲ್ಲಿಗೆ ಗಿಡದಲ್ಲಿ
ನಾ ಹುಡುಕುತಿರಲು ಹೂವೆಲ್ಲ ಎಲ್ಲಿಎಲ್ಲಿ
ಎಂದು, ನನ್ನ ಮುಡಿಯೇರಿ ಘಮವ ಬೀರಿ
ನಗುತ್ತಿದ್ದವು ಹೂಗಳು ನಾವಿಲ್ಲಿ ಇಲ್ಲಿ ಎಂದು,
ಹೂ ಬಿರಿದಂತ ನಗೆಯೊಂದು
ನನ್ನ ತುಟಿಯಂಚಿನಲ್ಲೂ..
ಈಗಷ್ಟೇ ಈ ಹೂವಿನ ಮೇಲಿದ್ದ
ಕಣ್ಣಿಗೆ ಹಬ್ಬವಾಗಿದ್ದ ಚಿಟ್ಟೆ ತಿರುಗಿ
ನೋಡುವಷ್ಟರಲ್ಲಿ ಹಾರಿ ಹೋದಾಗ,
ಕಳೆದು ಹೋದ ಕನಸುಗಳ ನೆನಪಾಗಿ
ನೀಳವಾದ ಒಂದು ನಿಟ್ಟುಸಿರು..
ಮತ್ತೆಲ್ಲಿಂದಲೋ ಹಾರಿ ಬಂದ
ಗುಬ್ಬಚ್ಚಿ ಚಿಲಿಪಿಲಿಗೆ ಒಲಿದು
ಮಗುವಾಯಿತೆನ್ನ ಮನಸು..
ರಾತ್ರಿ ಬಿಚ್ಚಿದಾಗಸದಲ್ಲಿ ಚುಕ್ಕಿಗಳನ್ನೆಣಿಸುವಾಗ
ಲೆಕ್ಕ ತಪ್ಪಿ ಹೋಗಿ ಕಂಗೆಟ್ಟಾಗ ನನ್ನ ನೋಡಿ
ಮರೆಯಲ್ಲೆಲ್ಲೋ ನಿಂತು ಮುಸಿ ಮುಸಿ ನಕ್ಕ
ಚಂದಿರನಿಗೆ ಮನಸೋತು ,ಮತ್ತೆ ಮತ್ತೆ
ಆ ನಗೆಯ ಕಾಣಲು ಚುಕ್ಕಿ
ಎಣಿಸಲು ಹೋಗಿ ಲೆಕ್ಕ ತಪ್ಪಿದೆನೇ ನಾನು?
ಮೋಡಗಳ ಗೂಡೊಳಗೆ ಆ ಚಂದ್ರ ಮರೆಯಾಗೆ
ಕಣ್ಣಲ್ಲಿ ಏನೋ ಹುಡುಕಾಟವಿತ್ತು,
ಮನದಲ್ಲಿ ಒಲವು ದೂರಾದ ನೋವಿನೆಳೆಯಿತ್ತು.
ಸೂರ್ಯನ ಎಳೆಯ ಕಿರಣಗಳು
ಸೋಕಿ ಕಣ್ಣೆವೆಗಳು ತೆರೆದುಕೊಂಡಾಗ
ಹೊಸ ಬೆಳಗು,ಹೊಸ ಕಿರಣ ,ಹೊಸ ಹಕ್ಕಿ ಹಾಡು
ಮನವು ಮುದಗೊಂಡು
ದಿನ ದಿನವೂ ಹೊಸ ಬದುಕು,
ಹೊಸ ಖುಷಿಯೂ, ನಗೆ ನಲಿವು
ಇರೆ ಬಾಳು ಸುಂದರವು ಎಂದು
ಮುನ್ನಡೆಯಲಣಿಯಾಗೆ
ಮನದಲ್ಲಿ ಉಳಿದಿತ್ತು, ಮಾತೊಂದೇ ಒಂದು
ಹೊಸತನದ ಸಂಭ್ರಮದಲಿ
ಹಳೆ ನೋವ ಹೊರ ತಳ್ಳಿ
ನಗೆ ಚೆಲ್ಲಿ ಸಾಗುವಾಗ
ನನ್ನ ಮನಸಿಂದ ಮಾಸದಿರಲಿ ಒಲವ ನೆನಪು..

5 comments:

ಸ್ಮಿತಾ said...

Changi bardidya shyami... good..

Sandeepa said...

ನೆನ್ಪೇ ಮರ್ತೋದ್ರೆ?!!

ಶ್ಯಾಮಾ said...

@ smitha

ಥ್ಯಾಂಕ್ಸೆ ಡುಮ್ಮಿ :)

@ Sandeepa

"ನೆನ್ಪೇ ಮರ್ತೋದ್ರೆ?!!"

ಅದೇ.. ಮರಿದೇ ಇರ್ಲಿ ಅಂತಾನೆ ನಾನು ಹೆಳ್ತಾ ಇರದು

ರಂಜನಾ ಹೆಗ್ಡೆ said...

ಶ್ಯಾಮ,
:) :) ಚನ್ನಾಗಿ ಇದ್ದು ಕವನ.

ಶ್ಯಾಮಾ said...

thanks ranju :)